ಕನ್ನಡ ಎಂದರೆ ಬರಿ ನುಡಿ ಅಲ್ಲ
ಮುತ್ತಿನ ಮಣಿ ಸಾಲು
ಕನ್ನಡ ಎನ್ನಲು ನಿನ ಕೊರಳಲ್ಲಿ
ಸಂಗೀತದ ಹೊನಲು
ಕನ್ನಡ ಎನುವ ಮೂರಕ್ಷರದಿ
ಎನಿತೋ ಅರ್ಥವಿದೆ
ಕನ್ನಡತನವ ಮೈಗೂಡಿಸಿದರೆ
ಬಾಳಿಗೆ ಸತ್ವವಿದೆ
ಕವಿ ಕೋಗಿಲೆಗಳು ಹಾಡಿವೆಯೆಂದರೆ
ಕನ್ನಡದೇ ಮೊದಲು
ಹಾಡಲು ಸೊಂಪು ಕೇಳಲು ಇಂಪು
ಇಲ್ಲ ಇಲ್ಲಿ ಅಳಲು
ದೇವಿ ಶಾರದೆಯ ಭಾಷೆಗಳಲ್ಲಿ
ಕನ್ನಡವೇ ಮೊದಲು
ಹಲವು ಭಾಷೆಗೆ ಒಲವು ತೋರಿರೆ
ಕನ್ನಡಕೇ ಮಿಗಿಲು
ಕನ್ನಡ ನೆಲದಲಿ ಹುಟ್ಟಿದೆಯೆಂದರೆ
ಹಿಂದಿನ ಪುಣ್ಯಫಲ
ಕಾವೇರೀ ಜಲ ಕುಡಿದೆಯೆಂದರೆ
ಅಮೃತಕೆಲ್ಲಿ ಬಲ?
*****
Related Post
ಸಣ್ಣ ಕತೆ
-
ವ್ಯವಸ್ಥೆ
ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…
-
ಉರಿವ ಮಹಡಿಯ ಒಳಗೆ
ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…
-
ದಿನಚರಿಯ ಪುಟದಿಂದ
ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್ಪ್ರೆಸ್ ಬಸ್ಸುಗಳು… Read more…
-
ಜಡ
ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…
-
ಆನುಗೋಲು
ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…